ಬೆಂಗಳೂರು ವರ್ಷದ ತನ್ನ ಅಂತಿಮ ಪಂದ್ಯದಲ್ಲಿ ಜಮ್ಶೆಡ್ಪುರವನ್ನು ಎದುರಿಸಲಿದೆ

ಕ್ವಾಡ್ರಾಟ್ 3 ಅಂಕಗಳ ಹಸಿವಿನಿಂದ ಹಂಗ್ರಿ ರೆಡ್ ಮೈನರ್ಸ್ ವಿರುದ್ಧ ಗೆದ್ದು ಬ್ಲೂಸ್ 2020 ಅನ್ನು ಸುಖಾಂತ್ಯವಾಗಿಸುವ ಯತ್ನದಲ್ಲಿದೆ.

ಮಾರ್ಗೋವಾ: ಕಾರ್ಲೆಸ್ ಕ್ವಾಡ್ರಾಟ್ ಅವರ ಬೆಂಗಳೂರು ಎಫ್‌ಸಿ ಸೋಮವಾರ ಗೋವಾದ ಫತೋರ್ದಾ ಕ್ರೀಡಾಂಗಣದಲ್ಲಿ ಈ ಸಾಲಿನ ಅಂತಿಮ ಪಂದ್ಯಕ್ಕೆ ಜಮ್ಶೆಡ್ಪುರ ಎಫ್‌ಸಿ ವಿರುದ್ಧ ಆತಿಥ್ಯ ವಹಿಸಲಿದೆ. ಆರನೇ ಸ್ಥಾನದಲ್ಲಿರುವ ಜಮ್‌ಶೆಡ್‌ಪುರಕ್ಕಿಂತ ಎರಡು ಪಾಯಿಂಟ್‌ಗಳಿಂದ ಬ್ಲೂಸ್ ಪ್ರಸ್ತುತ ಲೀಗ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ, ಆದರೆ ಓವನ್ ಕೋಯ್ಲ್ ನೇತೃತ್ವದ ತಂಡವು ಉತ್ತಮವಾಗಿ ಆಡುತ್ತಿದೆ ಮತ್ತು ಅಂಕಪಟ್ಟಿಯಲ್ಲಿ ಇನ್ನೂ ಉನ್ನತ ಸ್ಥಾನದಲ್ಲಿರಲು ಅರ್ಹವಾಗಿದೆ ಎಂದು ಕ್ವಾಡ್ರಾಟ್ ಒಪ್ಪಿಕೊಂಡರು.

“ಜಮ್ಶೆಡ್ಪುರ ಎಫ್‌ಸಿ ನಿಜವಾಗಿಯೂ ಉತ್ತಮ ಕೆಲಸ ಮಾಡುತ್ತಿದೆ ಮತ್ತು ಅವರು ಅಂಕಪಟ್ಟಿಯಲ್ಲಿ ಹೆಚ್ಚಿನ ಅಂಕಗಳನ್ನು ಹೊಂದಲು ಅರ್ಹರಾಗಿದ್ದಾರೆ. ಅವರು ಕೆಲವು ತೀರ್ಪುಗಳು ಮತ್ತು ಎಫ್‌ಸಿ ಗೋವಾ ವಿರುದ್ಧದ ಅಂತಿಮ ಕ್ಷಣಗಳಲ್ಲಿ ಅವರು ತಡವಾಗಿ ಗೋಲ್ ಪಡೆದುದ್ದು ದುರಾದೃಷ್ಟವಾಗಿ ಪರಿಣಮಿಸಿತು. ನಾವು ಸೆಣೆಸಾಡುವ ಬಲವುಳ್ಳ ಮತ್ತು ಹಸಿದಿರುವ ತಂಡದ ವಿರುದ್ಧ ಗೆಲುವಿಗಾಗಿ ಶ್ರಮಿಸುತ್ತೇವೆ.”

ಈ ಮಧ್ಯೆ, ಜಮ್ಶೆಡ್ಪುರ್ ತಮ್ಮ ತಂಡಕ್ಕೆ ಈ ಆವೃತ್ತಿಯಲ್ಲಿ ಪ್ರಮುಖ ಸೇರ್ಪಡೆಗಳನ್ನು ಮಾಡಿಕೊಂಡಿದೆ ಮತ್ತು ಇಂಗ್ಲಿಷ್ಮನ್ ಕೋಯ್ಲ್ ಅವರನ್ನು ಕರೆತಂದಿದೆ. ಈ ಹಿಂದೆ ಇವರು ಚೆನ್ನೈಯಿನ್ ಎಫ್ಸಿ ತಂಡವನ್ನು ಅಂತಿಮ ಹಂತದಲ್ಲಿ ಫೈನಲ್ಸ್ ಗೆ ಮುನ್ನಡೆಸಿದ್ದರು. ಕ್ವಾಡ್ರಾಟ್, ತಾವು ಸೋಮವಾರ ಎದುರಿಸುತ್ತಿರುವ ಸವಾಲಿನ ಬಗ್ಗೆ ತಿಳಿದಿದೆ ಎಂದು ಒಪ್ಪಿಕೊಂಡರು.

“ನಾವು ಜಮ್ಶೆಡ್ಪುರವನ್ನು ನಿಯಂತ್ರಿಸಬೇಕಾಗಿದೆ. ಪ್ರತಿ ವಾರ ಕಳೆದಂತೆ ಅವರ ವಿದೇಶಿ ಆಟಗಾರರು ಉತ್ತಮಗೊಳ್ಳುತ್ತಿದ್ದಾರೆ, ಮತ್ತು ಅವರ ಯುವ ಭಾರತೀಯ ಆಟಗಾರರು ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ವರ್ಷದ ಕೊನೆಯ ಪಂದ್ಯವಾಗಿದೆ, ಮತ್ತು ನಮ್ಮ ಉತ್ತಮ ಪ್ರದರ್ಶನಗಳನ್ನು ಮುಂದುವರಿಸಲು ನಾವು ಪ್ರಯತ್ನಿಸುತ್ತೇವೆ. ಕಳೆದ 11 ಪಂದ್ಯಗಳು, ನಾವು ಎರಡು ಬಾರಿ ಮಾತ್ರ ಸೋತಿದ್ದೇವೆ. ಇದರರ್ಥ ನಮ್ಮ ತಂಡವು ಪ್ರತಿ ಬಾರಿಯೂ ಪಾಯಿಂಟ್‌ಗಳಿಗಾಗಿ ಹೋರಾಡುತ್ತಿದೆ. ಜಮ್‌ಶೆಡ್‌ಪುರ್ ಎದುರಿಸಲು ಕಠಿಣ ಎದುರಾಳಿಯಾಗಿರುತ್ತದೆ, ಆದರೆ ನಮ್ಮಲ್ಲಿ ಒಂದು ಯೋಜನೆ ಇದೆ, ಮತ್ತು ನಾವು ಮೂರು ಅಂಕಗಳನ್ನು ಪಡೆಯಲು ಪ್ರಯತ್ನಿಸುತ್ತೇವೆ.”

ಕಳೆದ ಆವೃತ್ತಿಯ ಗೋಲ್ಡನ್ ಬೂಟ್-ವಿಜೇತ ನೆರಿಜಸ್ ವಾಲ್ಸ್ಕಿಸ್ ಈಗ ಜಮ್ಶೆಡ್ಪುರ ತಂಡವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಲಿಥುವೇನಿಯನ್ ಸ್ಟ್ರೈಕರ್ ಎಸೆಯುವ ಸವಾಲನ್ನು ಎದುರಿಸುವ ಬ್ಯಾಕ್ಲೈನ್ ಸಾಮರ್ಥ್ಯದ ಬಗ್ಗೆ ವಿಶ್ವಾಸವಿರುವುದಾಗಿ ಕ್ವಾಡ್ರಾಟ್ ಹೇಳಿದ್ದಾರೆ. “ನಾವು ಈ ಮೊದಲು ಅದ್ಭುತ ಸ್ಟ್ರೈಕರ್‌ಗಳನ್ನು ತಡೆದು ಸಮರ್ಥರೆನಿಸಿದ್ದೇವೆ. (ಫೆರಾನ್) ಕೊರೊಮಿನಾಸ್ ಮತ್ತು (ಬಾರ್ತಲೋಮೆವ್) ಒಗ್ಬೆಚೆ ನಮ್ಮ ವಿರುದ್ಧದ ಪೆನಾಲ್ಟಿಗಳಿಂದ ಮಾತ್ರ ಸ್ಕೋರ್ ಮಾಡಿದ್ದಾರೆ. ನಮ್ಮ ಹೆಚ್ಚಿನ ರಕ್ಷಣಾ ಸಾಮರ್ಥ್ಯದೊಂದಿಗೆ ನಾವು ಅಪಾಯಗಳನ್ನು ತೆಗೆದುಕೊಳ್ಳುತ್ತೇವೆ, ಅದು ನಮ್ಮ ಯೋಜನೆಯ ಭಾಗವಾಗಿದೆ.”

ಆಶಿಕ್ ಕುರುನಿಯಾನ್ ಅವರ ಗಾಯದ ನಂತರ ಕ್ಯುಡ್ರಾಟ್ ಅವರು ಬ್ಯಾಕ್ಲೈನ್ ಅನ್ನು ಮರುಹೊಂದಿಸುವ ಒತ್ತಡದಲ್ಲಿದ್ದಾರೆ ಮತ್ತು ಆಟಗಾರರು ತಂಡಕ್ಕೆ ಬಂದಾಗ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯತೆಯ ಬಗೆಗೆ ಹೇಳಿದರು. “ನಾವು ಕಳೆದ ಆವೃತ್ತಿಯಲ್ಲಿ ಅತ್ಯುತ್ತಮವಾದ ಡಿಫೆನ್ಸ್ ಹೊಂದಿದ್ದೆವು, ಕನಿಷ್ಠ ಗೋಲ್ ಗಳನ್ನು ಬಿಟ್ಟುಕೊಟ್ಟಿದ್ದೇವೆ ಮತ್ತು ಹೆಚ್ಚು ನಿಚ್ಚಳವಾಗಿ ಆಡಿದ್ದೇವೆ. ಈ ಆವೃತ್ತಿಯಲ್ಲಿ ಕೆಲ ಬದಲಾವಣೆಗಳಾಗಿವೆ ಮತ್ತು ಆಟಗಾರರು ಮಾದರಿಯನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ನಾವು ಈಗ ಆಶಿಕ್ ಅವರನ್ನು ಕಳೆದುಕೊಂಡಿದ್ದೇವೆ, ಅಂದರೆ ನಾವು ತಂಡವನ್ನು ಪುನಃ ರಚಿಸಬೇಕು.”

ಎಡ-ಬೆನ್ನಿನ ಗಾಯದಿಂದ ಹೊರಗುಳಿದಿರುವ ಆಶಿಕ್ ಬಗ್ಗೆ ಮಾತನಾಡುತ್ತಾ, ಕ್ವಾಡ್ರಾಟ್ ಮಾಹಿತಿ ಒದಗಿಸಿದರು. “ಆಶಿಕ್ ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ ಪಡೆದು ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾರೆ, ಅಲ್ಲಿ ಅವರು ಈಗ ಚೇತರಿಸಿಕೊಳ್ಳುತ್ತಾರೆ ಮತ್ತು ಅವರ ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಅವರ ಚೇತರಿಕೆಗೆ ಎಷ್ಟು ವಾರಗಳು ಬೇಕಾಗುತ್ತದೆ ಎಂಬುದನ್ನು ಖಚಿತಪಡಿಸುವುದು ಕಷ್ಟ. ಅವರ ಶಸ್ತ್ರಚಿಕಿತ್ಸೆಯ ನಂತರ ನಾವು ಫೋನ್ ಸಂಭಾಷಣೆ ನಡೆಸಿದ್ದೇವೆ ಮತ್ತು ಅವರು ಸಕಾರಾತ್ಮಕ ಮನಸ್ಥಿತಿಯಲ್ಲಿದ್ದಾರೆ.”

ಬ್ಲೂಸ್ ಮತ್ತು ಜಮ್‌ಶೆಡ್‌ಪುರ್ ಎಫ್‌ಸಿ ನಡುವಿನ ಪಂದ್ಯ ಸೋಮವಾರ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security